Friday, May 24, 2013

ಈ ತಾಲ್ಲೂಕಿನಲ್ಲಿ ಐತಿಹಾಸಿಕ ಹೊಯ್ಸಳರ ಕಾಲದ ಗಂಗಾಧರೇಶ್ವರ ದೇವಸ್ಥಾನವಿದೆ. ತುರುವೇಕೆರೆ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿನ ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನ, ಶ್ರೀ ಗಂಗಾಧರೇಶ್ವರ ದೇವಸ್ಥಾನ, ಮೂಲೇ ಶ್ರೀ ಶಂಕರೇಶ್ವರ ದೇವಸ್ಥಾನ, ಶ್ರೀ ಚನ್ನಿಗರಯಸ್ವಾಮಿ ದೇವಸ್ಥಾನಗಳು ಹೊಯ್ಸಳರ ಕಾಲದ ದೇವಸ್ಥಾನಗಳಾಗಿದ್ದರೆ ಊರ ಗ್ರಾಮ ದೇವತೆ ಶ್ರೀ ಉಡುಸಲಮ್ಮ ದೇವಸ್ಥಾನ, ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಿಂದ ತುರುವೇಕೆರೆ ಪ್ರಖ್ಯಾತವಾಗಿದೆ. ಸಮೀಪದ ಬದರಿಕಾಶ್ರಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತುರುವೇಕೆರೆಯಲ್ಲಿನ ಶ್ರೀ ಅಚಲಾನಂದರು ಸ್ಥಾಪಿಸಿದ್ದರೆನ್ನಲಾದ ನೂರಒಂದು ದೇವರ ದೇವಸ್ಥಾನ ಸಾಲಿಗ್ರಾಮಗಳ ದೇವಸ್ಥಾನವಾಗಿದೆ. ಸಮೀಪದ ಮಲ್ಲಾಘಟ್ಟ ಕೆರೆಯು ಪ್ರವಾಸಿ ತಾಣವಾಗಿದೆ. ಅಲ್ಲದೆ ತುರುವೇಕೆರೆ ಇಂದ ತಳ್ಕೆರೆ ರಸ್ತೆಯ ಕಡೆಗೆ ಸುಮಾರು ೫.ಕೀ ಮೀ ದೂರದ ಮಾದಿಹಳ್ಳಿ ಗ್ರಾಮದಲ್ಲಿ ಪ್ರಸಿದ್ದ ಶ್ರೀ ಹುತ್ತುಸಿದ್ದೇಶ್ವರ ಸ್ವಾಮಿಯ ದೇವಸ್ದಾನವಿದೆ. ಇಲ್ಲಿ ಪ್ರತಿ ಸೊಮವಾರದಂದು ವಿಶೇ‍‌‍‍ಶ ಪೂಜೆ ಮತ್ತು ಪ್ರತಿ ಹುಣ್ಣಿಮೆಯ ದಿನ ಸ್ವಾಮಿಯ ವಿಶೇಶ ಪೂಜೆಯೊಂದಿಗೆ ಅನ್ನದಾನವು ನೆರವೆರುತ್ತದೆ.

No comments:

Post a Comment